Download Now Banner

This browser does not support the video element.

ಕಾರವಾರ: ಗ್ರಾಮೀಣ ಪ್ರದೇಶಕ್ಕೆ ತೆರಳುವ ಬಸ್ ಇಲ್ಲದ ಸಾರ್ವಜನಿಕರಿಗೆ ತೊಂದರೆ :ನಗರದ ಬಸ್ ನಿಲ್ದಾಣದ ಬಳಿ ಹಠಾತ್ ಪ್ರತಿಭಟನೆ

Karwar, Uttara Kannada | Sep 1, 2025
ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಸೂಕ್ತ ಬಸ್ ಇಲ್ಲದ ಕಾರಣ ಸಾರ್ವಜನಿಕರು ಹಠಾತ್ ಪ್ರತಿಭಟನೆ ನಡೆಸಿದ ಘಟನೆ ನಗರದ ಬಸ್ ನಿಲ್ದಾಣದ ಬಳಿ ಸೋಮವಾರ ಸಂಜೆ 5ಕ್ಕೆ ನಡೆದಿದೆ. ಕಾರವಾರ ತಾಲೂಕಿನ ಕೆರವಡಿ, ಮಲ್ಲಾಪುರ ಭಾಗಕ್ಕೆ ತೆರಳುವ ಪ್ರಮಾಣಕರು ಬಸ್ ಇಲ್ಲದೆ ಪರದಾಡುವಂತಾಯಿತು. ಈ ಅವಧಿಯಲ್ಲಿ ಗ್ರಾಮೀಣ ಭಾಗಕ್ಕೆ ಸುಮಾರು 3-4 ಬಸ್ ಗಳು ಸಂಚರಿಸಬೇಕಾಗಿತ್ತು. ಆದರೆ ಮಧ್ಯಾಹ್ನದಿಂದಲೇ ತಮ್ಮ ಮನೆಗೆ ತೆರಳುವವರು ಬಸ್ ನಿಲ್ದಾಣದಲ್ಲೇ ಕಾಯುವಂಥ ಸ್ಥಿತಿ ನಿರ್ಮಾಣಗೊಂಡಿತ್ತು.
Read More News
T & CPrivacy PolicyContact Us