Download Now Banner

This browser does not support the video element.

ಕುಣಿಗಲ್: ಶಾಸಕ ರಂಗನಾಥ್ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ಮಂಜುನಾಥಸ್ವಾಮಿ ದರ್ಶನ ಪಡೆದ ಕಾಂಗ್ರೆಸ್ ಕಾರ್ಯಕರ್ತರು : ಎಸ್ ಐ ಟಿ ತನಿಖೆಗೆ ಬೆಂಬಲ

Kunigal, Tumakuru | Sep 6, 2025
ಕುಣಿಗಲ್ ಪಟ್ಟಣದಿಂದ ಶಾಸಕ ಡಾ. ಹೆಚ್. ಡಿ. ರಂಗನಾಥ್ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪುಣ್ಯ ಕ್ಷೇತ್ರ ಧರ್ಮಸ್ಟಳದಲ್ಲಿ ಮಂಜುನಾಥಸ್ವಾಮಿ ದರ್ಶನ ಮಾಡಿದ್ದಾರೆ. ಶನಿವಾರ ಮಧ್ಯಾಹ್ನ ಧರ್ಮಸ್ಥಳ ತಲುಪಿದ ಶಾಸಕ ರಂಗನಾಥ್ ಹಾಗೂ ನೂರಾರು ಬೆಂಬಲಿಗರು ದೇವರ ದರ್ಶನ ಮಾಡಿ ಎಸ್ ಐ ಟಿ ತನಿಖೆ ಬೆಂಬಲ ವ್ಯಕ್ತಪಡಿಸಿದ್ದಾರೆ.ಶನಿವಾರ ಬೆಳಿಗ್ಗೆ ಸುಮಾರು 8 ರ ಸಮಯದಲ್ಲಿ ಪಟ್ಟಣದಿಂದ ನೂರಾರು ಕಾರುಗಳಲ್ಲಿ ತೆರಳಿದ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಡಾ ರಂಗನಾಥ್ ನೇತೃತ್ವದಲ್ಲಿ ಧರ್ಮಸ್ಥಳ ತಲುಪಿದರು. ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ ಐ ಟಿ ತನಿಖೆ ನಡೆಯುತ್ತಿದೆ. ಪ್ರಾಮಾಣಿಕವಾಗಿ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಕ್ಷೇತ್ರಕ್ಕೆ ಆಂಟಿರುವ ಕಳಂಕ ದೂರವಾಗಬೇಕು ಎಂದರು.
Read More News
T & CPrivacy PolicyContact Us