Download Now Banner

This browser does not support the video element.

ನಂಜನಗೂಡು: ಆಸ್ಪತ್ರೆಯಿಂದ ಮಗುವಿನ ಶವ ತರಲು ಭಿಕ್ಷೆ ಬೇಡಿದ ಕುಟುಂಬಸ್ಥರು: ಸಿಎಂ ತವರಲ್ಲಿ ಹೃದಯ ಕಲಕುವ ದೃಶ್ಯ

Nanjangud, Mysuru | Sep 11, 2025
ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಡ ಮಗುವಿನ ಶವ ಪಡೆಯಲು ಹಣದ ಕೊರತೆಯಾದ ಹಿನ್ನಲೆ ದೊಡ್ಡಮ್ಮ ಗ್ರಾಮದಲ್ಲಿ ಸೆರಗು ಚಾಚಿ ಮನೆ ಮನೆಗೆ ತೆರಳಿ ಭಿಕ್ಷೆ ಬೇಡಿದ ಮನಕಲುಕುವ ಘಟನೆ ಬೆಳಕಿಗೆ ಬಂದಿದೆ.ಮೈಸೂರಿನ ಖಾಸಗಿ ಆಸ್ಪತ್ರೆಯ ವರ್ತನೆಗೆ ಗ್ರಾಮಸ್ಥರು ಹಿಡಿಶಾಪ ಹಾಕಿದ್ದಾರೆ. ನಂಜನಗೂಡು ತಾಲ್ಲೂಕಿನ ಹೆಡೆತಲೆ ಗ್ರಾಮದಲ್ಲಿ ಘಟನೆ ನಡೆದಿದೆ. ಹೆಡತಲೆ ಗ್ರಾಮದ ಮಹೇಶ್ ಮತ್ತು ರಾಣಿ ಎಂಬ ದಂಪತಿಯ ಐದು ವರ್ಷದ ಮಗು ಆದ್ಯ ಮೃತಪಟ್ಟಿದೆ. ಮಂಗಳವಾರ ಸಂಜೆ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದ ಚಾಮರಾಜನಗರ ಮತ್ತು ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಬೈಕ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಹೆಮ್ಮರಗಾಲ ಗ್ರಾಮದ ಮೂವರಿಗೆ ಮತ್ತು ಹೆಡತಲೆ ಗ್ರಾಮದ ಮಹೇಶ್, ರಾಣಿ ಎಂಬ ದಂಪತಿಗಳು
Read More News
T & CPrivacy PolicyContact Us