Download Now Banner

This browser does not support the video element.

ವಿಜಯಪುರ: ಕುದರಿ ಸಾಲವಾಡಗಿ ಗ್ರಾಮದಲ್ಲಿ ರಸ್ತೆ ಅಗಲೀಕರಣದಿಂದ ಬೀದಿಗೆ ಬಿದ್ದ 120 ಕುಟುಂಬಗಳು ಪರಿಹಾರಕ್ಕಾಗಿ ಮನವಿ

Vijayapura, Vijayapura | Sep 5, 2025
ರಸ್ತೆ ಅಗಲೀಕರಣದ ಹೆಸರಿನಲ್ಲಿ 120 ಕುಟುಂಬಗಳನ್ನು ಶಾಸಕ ರಾಜುಗೌಡ ಪಾಟೀಲ್ ಬೀದಿಗೆ ತಂದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕುದುರಿ ಸಾಲವಾಡಗಿ ಗ್ರಾಮದಲ್ಲಿ ರಸ್ತೆ ಅಗಲೀಕರಣ ಮಾಡುವ ನೆಪದಲ್ಲಿ ಸುಮಾರು 120 ಕುಟುಂಬಗಳನ್ನು ಜೆಸಿಪಿ ಮೂಲಕ ನೆಲಸಮಗೊಳಿಸಿದ್ದಾರೆ. ನೋಟಿಸ್ ನೀಡಿ ಒಂದೇ ವಾರದಲ್ಲಿ ಮನೆಗಳನ್ನು ಧ್ವಂಸಗೊಳಿಸಿದ ಹಿನ್ನೆಲೆ ನಮ್ಮ ಬದುಕು ಬೀದಿಗೆ ಬಂದಿದೆ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿ, ವಿಜಯಪುರದಲ್ಲಿ ನೊಂದ ಕುಟುಂಬಗಳು ಶುಕ್ರವಾರ ಸಾಯಂಕಾಲ 5ಗಂಟೆ ಸುಮಾರಿಗೆ ಮಾಧ್ಯಮ ಮೂಲಕ ಸರಕಾರಕ್ಕೆ ಆಗ್ರಹಿಸಿದರು.
Read More News
T & CPrivacy PolicyContact Us