Download Now Banner

This browser does not support the video element.

ಬೆಂಗಳೂರು ಉತ್ತರ: ಜಾತಿಗಣತಿ ಮರು ಸರ್ವೇಗೆ ಶಿಕ್ಷಕರ ಸಮಸ್ಯೆ ಆಗಲಿದೆ: ನಗರದಲ್ಲಿ ಮಾಜಿ ಸಚಿವ ಆಂಜನೇಯ

Bengaluru North, Bengaluru Urban | Jun 14, 2025
ಒಳ ಮೀಸಲಾತಿ ವಿಚಾರವಾಗಿ ಆನಂದ್ ರಾವ್ ಸರ್ಕಲ್ ಬಳಿಯ ಖಾಸಗಿ ಹೋಟೆಲ್ ನಲ್ಲಿ ಶನಿವಾರ ಸಭೆ ನಡೆದಿದ್ದು, ಸಭೆ ಬಳಿಕ ಮಾಧ್ಯಮಗಳ ಜೊತೆ ಮಧ್ಯಾಹ್ನ 1:40 ರ ಸುಮಾರಿಗೆ ಮಾತನಾಡಿದ ಮಾಜಿ ಸಚಿವ ಹೆಚ್ ಆಂಜನೇಯ ಅವರು, ನಾನು ಹಿಂದೆ ಸಚಿವನಾಗಿದ್ದಾಗ ಒಂದೂವರೆ ಲಕ್ಷ ಶಿಕ್ಷಕರು ಇದ್ದಾಗ ಸಮೀಕ್ಷೆ ಮಾಡಿದ್ವಿ. ಕಾಂತರಾಜು ನೇತೃತ್ವದಲ್ಲಿ ಸಮೀಕ್ಷೆ ಆಗಿತ್ತು. ಆ ವರದಿ ಸ್ವೀಕಾರ ಮಾಡಬೇಕಿತ್ತು, ಯಾವ ಜನಾಂಗ ಒಳಗೊಂಡಿಲ್ಲ ಅನ್ನೋದು ನೋಡಬೇಕಿತ್ತು. ಸರ್ವೇ ಮಾಡಿದ್ದ ಕಾಪಿ ಬಹಿರಂಗ ಪಡಿಸಬೇಕಿತ್ತು. ಯಾವ ಹಳ್ಳಿ, ಮನೆ ಬಿಟ್ಟಿದ್ದಾರೆ ಅಂತ ನೋಡಬೇಕಿತ್ತು. ಆದ್ರೆ ಸರ್ಕಾರ ಪಕ್ಷ ಹೊಸ ಸಮೀಕ್ಷೆ ಮಾಡಬೇಕು ಎಂದಿದೆ. ಹೊಸದಾಗಿ ಸಮೀಕ್ಷೆ ಮಾಡೋಕೆ ಹೊರಟಿದ್ದಾರೆ.
Read More News
T & CPrivacy PolicyContact Us