Download Now Banner

This browser does not support the video element.

ಶೋರಾಪುರ: ಮದಲಿಂಗನಾಳ ಗ್ರಾಮದ ಯುವಕ ಭೀಮಣ್ಣನ ಕೊಲೆ ಆರೋಪ,ಘಟನೆ ಖಂಡಿಸಿ ನಗರದ ತಹಸಿಲ್ದಾರ್ ಕಚೇರಿ ಮುಂದೆ ಮಾದಿಗ ದಂಡೂರ ಸಂಘಟನೆ ಪ್ರತಿಭಟನೆ

Shorapur, Yadgir | Sep 11, 2025
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮದಲಿಂಗನಾಳ ಗ್ರಾಮದ ದಲಿತ ಸಮುದಾಯದ ಯುವಕ ಭೀಮಣ್ಣ ಎನ್ನುವವರನ್ನು ಯಾರು ದುಷ್ಕರ್ಮಿಗಳು ಕೊಲೆ ಮಾಡಿ ನಾರಾಯಣಪುರ ಬಳಿಯ ಬೋರುಕಾ ವಿದ್ಯುತ್ ಸ್ಥಾವರದ ಬಳಿಯ ಕಾಲುವೆಯಲ್ಲಿ ಬಿಸಾಕಿದ್ದು ಕೊಲೆಗಾರರನ್ನು ಬಂಧಿಸುವಂತೆ ಆಗ್ರಹಿಸಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಸುರಪುರ ತಾಲೂಕ ಘಟಕದಿಂದ ಸುರಪುರ ನಗರದ ತಹಸಿಲ್ದಾರ್ ಕಚೇರಿ ಮುಂದೆ ಗುರುವಾರ ಮಧ್ಯಾಹ್ನ ಪ್ರತಿಭಟನೆ ನಡೆಸಲಾಯಿತು. ನಂತರ ತಹಸಿಲ್ದಾರರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ತಾಲೂಕ ಅಧ್ಯಕ್ಷ ಬಸವರಾಜ ಹಾದಿಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Read More News
T & CPrivacy PolicyContact Us