ದಾಂಡೇಲಿ : ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಜಿಲ್ಲಾ ಮಟ್ಟದ ಸಭೆಯು ಸೆ. 14 ರಂದು ಮುಂಜಾನೆ 11.30 ಕಾರವಾರದ ಕೋಡಿಬಾಗ ರಸ್ತೆಯಲ್ಲಿರುವ ಹೊಟೆಲ್ ಈಡನ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆಯವರು ತಿಳಿಸಿದ್ದಾರೆ ಈ ಬಗ್ಗೆ ಇಂದು ಮಂಗಳವಾರ ಸಂಜೆ 5:30 ಗಂಟೆ ಸುಮಾರಿಗೆ ದಾಂಡೇಲಿ ನಗರದಲ್ಲಿ ಮಾಧ್ಯಮಕ ನೀಡಿದ ಮಾಹಿತಿಯಲ್ಲಿ ಬಿಎನ್ ವಾಸರೆಯವರು ತಿಳಿಸಿದ್ದಾರೆ. ಈ ಸಭೆಯಲ್ಲಿ ಕಸಾಪ ಆಜೀವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬಿ.ಎನ್.ವಾಸರೆ ಅವರು ಮನವಿ ಮಾಡಿದ್ದಾರೆ.