Download Now Banner

This browser does not support the video element.

ಬೆಂಗಳೂರು ಉತ್ತರ: ಈ ಬಾರಿ ದಸರಾ ಉದ್ಘಾಟನೆ ಬಾನು ಮುಷ್ತಾಕ್ ಮಾಡಲಿದ್ದಾರೆ: ನಗರದಲ್ಲಿ ಸಿಎಂ ಸಿದ್ದರಾಮಯ್ಯ

Bengaluru North, Bengaluru Urban | Aug 22, 2025
ಈ ಬಾರಿಯ ದಸರಾ ಉದ್ಘಾಟನೆ ಭಾನು ಮುಷ್ತಾಕ್ ಮಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು. ಶುಕ್ರವಾರ ಮಧ್ಯಾಹ್ನ 4:30 ರ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾನು ಮುಷ್ತಾಕ್ ಅವರಿಗೆ ಜಿಲ್ಲಾಡಳಿತ ಗೌರವದಿಂದ ಆಹ್ವಾನ ಕೊಡ್ತಾರೆ. ಈ ಭಾರಿ ದಸರಾ ಉದ್ಘಾಟನೆಯನ್ನ ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್ ಉಧ್ಘಾಟನೆ ಮಾಡಲಿದ್ದಾರೆ. ಕರ್ನಾಟಕದ ಒಬ್ಬ ಮಹಿಳೆಗೆ ಬೂಕರ್ ಪ್ರಶಸ್ತಿ ಸಿಕ್ಕಿರೊದು ಬಹಳ ಸಂತೋಷ ಹೋರಾಟದ ಹಿನ್ನೆಲೆಯಿಂದ ಬಂದವರು ಅವರು, ಕನ್ನಡ ಚಳುವಳಿಯಲ್ಲಿ ಕೆಲಸ ಮಾಡಿರುವವರು, ಪ್ರಗತಿ ಪರ ಚಿಂತಕರು. ದಸರಾ ಉಧ್ಘಾಟನೆಗೆ ಅವರಿಗೆ ಆಹ್ವಾನ ಮಾಡಿದ್ದೇವೆ, ಈ ಬಗ್ಗೆ ನಾನು ಸಹ ಮಾತಾಡಿದ್ದೇನೆ. ಈ ಭಾರಿ 11ದಿನ ದಸರಾ ನಡೆಯಲಿದೆ ಎಂದರು.
Read More News
T & CPrivacy PolicyContact Us