ವಿಜಯಪುರ ನಗರದ ಚಿದಂಬರೇಶ್ವರ ದೇವಸ್ಥಾನ ಕಮಿಟಿ ವತಿಯಿಂದ ಶ್ರಾವಣ ಮಾಸದ ದಾನಮ್ಮದೇವಿ ಪುರಾಣ ಕಾರ್ಯಕ್ರಮ ಪ್ರಯುಕ್ತ ಹಮ್ಮಿಕೊಂಡಿದ್ದ. ಸಂಸ್ಕೃತಿ ಕಾರ್ಯಕ್ರಮವನ್ನು ಶನಿವಾರ ರಾತ್ರಿ 8ಗಂಟೆ ಸುಮಾರಿಗೆ ಜ್ಞಾನ ಯೋಗಾಶ್ರಮದ ಬಸವಪ್ರಭು ಶ್ರೀಗಳು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಂದ ದೇವಿ ನೃತ್ಯ ಹಾಗೂ ಭರತನಾಟ್ಯಗಳ ಸೇರಿದಂತೆ ನಾನಾ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ವೇಳೆ ಮಾತನಾಡಿ ಮಕ್ಕಳಿಗೆ ಕಲೆ ಮತ್ತು ಸಾಂಸ್ಕೃತಿಕ ಹವ್ಯಾಸ ಬೆಳೆಸುವ ಕೆಲಸ ಪೋಷಕರು ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಠಾಧೀಶರು ಭಕ್ತಾದಿಗಳು ಉಪಸ್ಥಿತರಿದ್ದರು.