Download Now Banner

This browser does not support the video element.

ರಾಯಚೂರು: ನಗರದ ಬಸ್ ನಿಲ್ದಾಣದ ಶೌಚಾಲಯದಲ್ಲಿ ಉಪ ಲೋಕಾಯುಕ್ತರ ಸೂಚನೆ ಯಿಂದ ಕ್ಯೂ.ಆರ್ ಅಳವಡಿಕೆ, ಚಿಲ್ಲರೆ ಸಮಸ್ಯೆಗೆ ಮುಕ್ತಿ

Raichur, Raichur | Aug 31, 2025
ರಾಯಚೂರ ನಗರದ ನಗರದ ಬಸ್ ನಿಲ್ದಾಣದಲ್ಲಿ ಶೌಚಾಲಯದಲ್ಲಿ ಸಾರ್ವಜನಿಕರು ಚಿಲ್ಲರೆ ಕೊಡಲು ಇಲ್ಲದೆ ಶೌಚಾಲಯ ನಿರ್ವಹಣೆ ಮಾಡುವವರು ಮತ್ತು ಸಾರ್ವಜನಿಕರ ಮಧ್ಯೆ ವಿವಾದ ನಡೆಯುತ್ತಿತ್ತು. ಮೂರು ದಿನಗಳ ಜಿಲ್ಲಾ ಪ್ರವಾಸಕ್ಕೆ ಆಗಮಿಸಿದ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರು ಬಸ್ ನಿಲ್ದಾಣಕ್ಕೆ ಭೇಟಿ ನೀಡಿದಾಗ ಚಿಲ್ಲರೆ ಸಮಸ್ಯೆಯ ಸೂಕ್ಷ್ಮತೆಯನ್ನು ಗಮನಿಸಿ ಶೌಚಾಲಯದ ಮುಂದೆ ಕ್ಯೂ ಆರ್ ಅಳವಡಿಸಲು ಸೂಚನೆ ನೀಡಿದ್ದರು. ಭಾನುವಾರ ಬೆಳಿಗ್ಗೆ ಕ್ಯೂ ಆರ್ ಅಂಟಿಸಿದ್ದು ಚಿಲ್ಲರೆ ಸಮಸ್ಯೆಗೆ ಪರಿಹಾರ ದೊರೆತಿದೆ.ಉಪ ಲೋಕಾಯುಕ್ತರ ಸೂಚನೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
Read More News
T & CPrivacy PolicyContact Us