Download Now Banner

This browser does not support the video element.

ಶ್ರೀರಂಗಪಟ್ಟಣ: ಕೆ ಆರ್ ಎಸ್ ಜಲಾಶಯಕ್ಕೆ ಒಳಹರಿವು ಕಡಿಮೆ: 14886 ಕ್ಯೂಸೆಕ್ ದಾಖಲು

Shrirangapattana, Mandya | Aug 23, 2025
ಮಂಡ್ಯ ಜಿಲ್ಲೆಯ ಜೀವನಾಡಿ ಕೆ ಆರ್ ಎಸ್ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದ್ದು, 14886 ಕ್ಯೂಸೆಕ್ ದಾಖಲಾಗಿದೆ. ಶನಿವಾರ ಈ ಕುರಿತು ನಗರದಲ್ಲಿ ಕಾನೀನಿ ಮಾಹಿತಿ ನೀಡಿದ್ದು, ಕಾವೇರಿ ಕಣಿವೆಯಲ್ಲಿ ಮಳೆತ ಅಬ್ಬರ ಕಡಿಮೆಗೊಂಡ ಹಿನ್ನಲೆ ಒಳಹರಿವು ಕಡಿಮೆಗೊಂಡಿದೆ. ಪರಿಣಾಮ 14065 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ ಎಂದು ತಿಳಿಸಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿ ಪೈಕಿ 123.72 ಅಡಿ ನೀರಿನ ಸಂಗ್ರಹವಿದೆ‌. ಜಲಾಶಯದ ಗರಿಷ್ಠ ನೀರಿನ ಸಂಗ್ರಹ 49.452 ಟಿಎಂಸಿ ಪೈಕಿ 47953 ಟಿಎಂಸಿ ಸಂಗ್ರಹವಿದ್ದು ಅದರಲ್ಲಿ ಬಳಕೆಗೆ ಯೋಗ್ಯವಾದ 39.574 ಟಿಎಂಸಿ ನೀರಿದೆ ಎಂದು ಮೂಲಗಳು ತಿಳಿಸಿವೆ‌. ಕಳೆದ ವಾರ ಬಿದ್ದ ಮಳೆಗೆ ಕಾವೇರಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು.
Read More News
T & CPrivacy PolicyContact Us