ಚಲಿಸುತ್ತಿದ್ದ ಕೆಎಸ್ಆರ್ಟಿ ಸಿ ಬಸ್ನ ಆಕ್ಸೆಲ್ ಕಟ್ಟಾಗಿ ಬಸ್ 4 ಅಡಿ ಮೇಲಕ್ಕೆ ಹಾರಿ ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದ ಘಟನೆ ಚಿಕ್ಕಮಗಳೂರು ನಗರದ ಕೋಟೆ ಬಳಿ ಭಾನುವಾರ ನಡೆದಿತ್ತು. ಈ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸರಿಯಾಗಿದ್ದು ಚಲಿಸುತ್ತಿದ್ದ ಬಸ್ ಅಕ್ಸೆಲ್ ಕಟ್ ಆಗುತ್ತಿದ್ದಂತೆ 4 ಅಡಿ ಮೇಲಕ್ಕೆ ಹಾರಿದ್ದು. ಚಾಲಕನ ಸಮಯ ಪ್ರಜ್ಞೆಯಿಂದ ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ಭಾರಿ ಪ್ರಮಾಣದ ಅನಾಹುತ ತಪ್ಪಿದೆ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯ ಎಂತಹವರನ್ನು ಕೂಡ ಎದೆ ಜಲ್ ಎನಿಸುವಂತಿದೆ.