ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನೂತನ ಗಣೇಶ-ಮಾರುತಿ ಮಂದಿರ ಲೋಕಾರ್ಪಣೆ ಗೊಳಿಸಿದ ಶಾಸಕ ಅಭಯ್ ಪಾಟೀಲ್. ಕೇಂದ್ರ ಬಸ್ ನಿಲ್ದಾಣದಲ್ಲಿ ನೂತನ ನಿರ್ಮಾಣಗೊಂಡ ಶ್ರೀ ಗಣೇಶ-ಹನುಮಾನ ಮಂದಿರವನ್ನು ಶಾಸಕ ಅಭಯ್ ಪಾಟೀಲ್ ಅವರು ಶುಕ್ರವಾರ ಲೋಕಾರ್ಪಣೆಗೊಳಿಸಿದರು. 2025-26ನೇ ಸಾಲಿನ ಸ್ಥಳೀಯ ಶಾಸಕರ ಅನುದಾನ ಯೋಜನೆಯಡಿ, ಶಾಸಕರಾದ ಅಭಯ ಪಾಟೀಲ ಅವರು ಕೇಂದ್ರ ಬಸ್ ನಿಲ್ದಾಣದಲ್ಲಿರುವ ಹನುಮಾನ ಗಣಪತಿ ಮಂದಿರ ನಿರ್ಮಾಣಕ್ಕಾಗಿ 8 ಲಕ್ಷ ರೂಪಾಯಿ ಅನುದಾನವನ್ನು ಮಂಜೂರು ಮಾಡಿದ್ದಾರೆ.