Download Now Banner

This browser does not support the video element.

ಬಂಗಾರಪೇಟೆ: ಶಿಕ್ಷಕರು ಮಕ್ಕಳಿಗೆ ಜ್ಞಾನ ತುಂಬಿ ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಶಿಲ್ಪಿಗಳು:ನಗರದಲ್ಲಿ‌ ಶಾಸಕ‌ಎಸ್ ಎನ್ ನಾರಾಯಣಸ್ವಾಮಿ

Bangarapet, Kolar | Sep 9, 2025
ಇದೇ ವರ್ಷದಿಂದ ಎಸ್‌ಎನ್ ರೆಸಾರ್ಟ್ನಲ್ಲಿ ಕೆಎಎಸ್,ಐಎಎಸ್ ಕೋಚಿಂಗ್ ಸೆಂಟರ್ ಆರಂಭಿಸುವ ಮೂಲಕ ಕ್ಷೇತ್ರದ ಪ್ರತಿಭಾವಂತ ಉನ್ನತ ವ್ಯಾಸಂಗ ಮಾಡಬಯಸಿವವರಿಗೆ ಅನುಕೂಲವಾಗಲಿದೆ ಎಂದು ಶಾಸಕ,ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಎಸ್.ಎನ್.ರೆಸಾರ್ಟ್ನಲ್ಲಿ ಮಂಗಳವಾರ ತಾಲೂಕು ಆಡಳಿತ ಹಾಗೂ ಶಿಕ್ಷಕರ ಸಂಘದಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು ಅವರೆಲ್ಲಾ ಕೆಎಎಸ್,ಐಎಎಸ್ ಕೋಚಿಂಗ್ ಪಡೆಯಲು ಬೆಂಗಳೂರಿಗೆ ಹೋಗುವಂತಾಗಿದೆ,ಈ ಹಿನ್ನೆಲೆ ಪಟ್ಟಣದಲ್ಲೆ ಅವರಿಗೆಲ್ಲಾ ಕೋಚಿಂಗ್ ಸೆಂಟರ್ ತೆರೆದರೆ ಅನುಕೂಲವಾಗಲಿದೆ ಎಂದು ಭಾವಿಸಿ ಈ ವರ್ಷವೇ ತರಬೇತಿ ತರಗತಿಗಳನ್ನು ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
Read More News
T & CPrivacy PolicyContact Us