Download Now Banner

This browser does not support the video element.

ಸಾಗರ: ಭಾವೈಕ್ಯತೆ ಸಂದೇಶ ಸಾರಿದ ಸಾಗರದ ಭಗತ್ ಸಿಂಗ್ ಯುವಜನ ಸಂಘಟನೆಯ ಗಣೇಶ

Sagar, Shimoga | Aug 28, 2025
ಶಿವಮೊಗ್ಗ ಜಿಲ್ಲೆಯ ಸಾಗರ ನಗರಸಭೆ ವ್ಯಾಪ್ತಿಯ ಏಳನೇ ವಾರ್ಡಿನ ಅಣಲೇಕೊಪ್ಪದಲ್ಲಿ ಹಿಂದೂ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಯುವಕರು ಒಟ್ಟಾಗಿ ಸೇರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಸಮಾಜದಲ್ಲಿ ಭಾವೈಕ್ಯತೆಯ ಸಂದೇಶವನ್ನು ಸಾರಿದ್ದಾರೆ. ಕಳೆದ ಮೂರು ವರ್ಷಗಳಿಂದ ಸರ್ವಧರ್ಮೀಯರಾಗಿ ಗಣೇಶ ಉತ್ಸವ ನಡೆಸಿಕೊಂಡು ಬರುತ್ತಿರುವ ಇಲ್ಲಿನ ಭಗತ್ ಸಿಂಗ್ ಯುವಜನ ಸಂಘದ ಯುವಕರು,ಈ ವರ್ಷವೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ‌.ಗುರುವಾರ ಕೂಡ ಹಿಂದೂ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಯುವಕರಲ್ಲ ಸೇರಿ ವಿಘ್ನವಿನಾಶಕನಿಗೆ ವಿಶೇಷ ಪೂಜೆ ಸಲ್ಲಿಸಿದರು.
Read More News
T & CPrivacy PolicyContact Us