ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಒಳ ಮೀಸಲಾತಿಯಿಂದ ಭೋವಿ ವಡ್ಡರ ಸಮಾಜಕ್ಕೆ ಅನ್ಯಾಯವಾಗುತಿದ್ದು ಈ ನಿರ್ಧಾರವನ್ನು ಸರ್ಕಾರ ಕೂಡಲೆ ಹಿಂದೆ ಪಡೆಯಬೇಕು ಎಂದು ಬೆಳಗಾವಿ ಜಿಲ್ಲಾ ಭೂವಿ ಸೊಶಿಯಲ್ ವೆಲಫೆರದ ಸೋಸಾಯಟಿ ಜಿಲ್ಲಾಧ್ಯಕ್ಷ ಎಲ್.ಜಿ.ಗಾಡಿವಡ್ಡರ ಬುಧವಾರ 1 ಗಂಟೆಗೆ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಭೋವಿ ವಡ್ಡರ ಸಮಾಜವು ದೊಡ್ಡ ಸಮಾಜವಾಗಿದೆ.ಸಮಾಜಕ್ಕೆ ಪ್ರತ್ಯೇಕ 2%ಮೀಸಲಾತಿ ನೀಡಬೇಕು ಸರ್ಕಾರ ಜಾರಿಗೆ ತರುತ್ತಿರುವ ಮೀಸಲಾತಿಯಲ್ಲಿ ಒಟ್ಟು 63 ಜಾತಿಗಳು ಸೇರಿ 5%ಒಳ ಮೀಸಲಾತಿಯನ್ನು ನೀಡಲಾಗಿದ್ದು ತೀರ ಅನ್ಯಾಯವಾಗುತ್ತೆ ಅದರಂತೆ ಎಡಗೈ & ಬಲಗೈ ಜಾತಿ ಪಂಗಡಗಳಿಗೆ ಪ್ರತ್ಯೇಕ 6% ಒಳಮೀಸಲಾತಿಯನ್ನು ನೀಡಲಾಗಿದೆ ಆದರೆ ಭೋವಿ ವಡ್ಡರ ಸಮಾಜ ದೊಡ್ಡ ಸಮಾಜವಾಗಿದೆ ಎಂದರು.