ನಗರದ ರೋಟರಿ ಶತಾಬ್ದಿ ಭವನವು ವಿವಿಧ ಶಾಲೆಯ ವಿದ್ಯಾರ್ಥಿಗಳ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆಗೆ ರವಿವಾರ ಮಧ್ಯಾಹ್ನ2.50ಕ್ಕೆ ನಡೆಯಿತು. ರೋಟರಿ ಕ್ಲಬ್ ಕಾರವಾರ, ಕೃಷ್ಣಾನಂದ ಬಾಂದೇಕರ ಪ್ರಾಯೋಜಕತ್ವದಲ್ಲಿ, ದೇಶಭಕ್ತಿ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಶಿವಾಜಿ ಬಾಲಮಂದಿರದ ತನುಶ್ರೀ ಮೊದಲ ಬಹುಮಾನವನ್ನು ಪಡೆದರು. ಸೇಂಟ್ ಜೋಸೆಫ್ ಹೈಸ್ಕೂಲ್ನ ಶ್ರೀಗುರು ಶೆಟ್ಟಿ ಎರಡನೇ ಬಹುಮಾನ ಪಡೆದರು. ಕೆ.ಪಿ.ಎಸ್ ಶಿರವಾಡದ ನಕ್ಷಿತಾ ಗೌಡ ಮತ್ತು ಯೂನಿಟಿ ಹೈಸ್ಕೂಲ್ನ ಶಬನಮ್ ಬುಕಿತಗಾರ ಮೂರನೇ ಬಹುಮಾನವನ್ನು ಹಂಚಿಕೊಂಡರು.