ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಉತ್ತಂಬಳ್ಳಿ ಬಳಿ ನಿರ್ಮಿತವಾಗಿರುವ ಮೇಲ್ಸೇತುವೆಯ ತಡೆಗೋಡೆ ಕುಸಿತಗೊಂಡ ಘಟನೆ ಭಾನುವಾರ ಮದ್ಯಾಹ್ನ12ರಲ್ಲಿ ವರದಿಯಾಗಿದೆ.ಈ ಹಿನ್ನಲೆ ಶಾಸಕ ಎ ಆರ್ ಕೃಷ್ಣಮೂರ್ತಿ ಪರಿಶೀಲನೆ ನಡೆಸಿದರು ಈ ಮೇಲ್ಸೇತು ರಸ್ತೆ, ಚಾಮರಾಜನಗರ – ಕೊಳ್ಳೇಗಾಲ ಮಾರ್ಗವಾಗಿ ಬೆಂಗಳೂರಿಗೆ ಸಂಪರ್ಕ ನೀಡುವ ರಾಷ್ಟ್ರೀಯ ಹೆದ್ದಾರಿಯ ಆಗಿದ್ದು ವಾಹನ ಸಂಚಾರಕ್ಕೆ ಪ್ರಾಮುಖ್ಯತೆ ಇರುವ ಈ ಸೇತುವೆಯಲ್ಲಿ ತಡೆಗೋಡೆ ಕುಸಿತದಿಂದಾಗಿ ವಾಹನಗಳ ಓಡಾಟದ ಮೇಲೆ ತಾತ್ಕಾಲಿಕವಾಗಿ ಪರಿಣಾಮ ಬೀರುವ ಸಾಧ್ಯತೆಯಿದೆ.