Download Now Banner

This browser does not support the video element.

ಜಗಳೂರು: ಜಗಳೂರು ಪಟ್ಟಣ ಪಂಚಾಯ್ತಿಯಲ್ಲಿ ಗೋಲ್ ಪಾಲ್; ಅಧಿಕಾರಿ-ಸದಸ್ಯರ ನಡುವೆ ವಾಗ್ವಾದ

Jagalur, Davanagere | Sep 11, 2025
ಸಮುದಾಯ ಸಂಘಟನಾ ಅಧಿಕಾರಿ ಎಂ.ಕೃಷ್ಣನಾಯ್ಕ ಅವರು ವಸ್ತುಗಳ ಖರೀದಿ ವೆಚ್ಚವನ್ನು ಸರ್ಕಾರಕ್ಕೆ ವರದಿ ಮಾಡುವೆ. ಕೇಳಲು ಸದಸ್ಯರು ಯಾರು ಎನ್ನುತ್ತಿದ್ದಂತೆ ಗರಂ ಆದ ಪಟ್ಟಣ ಪಂಚಾಯ್ತಿ ರಮೇಶ್, ದೇವರಾಜ್, ಶಕೀಲ್ ಅಹಮ್ಮದ್, ಮಂಜುನಾಥ್, ಸಿದ್ದಪ್ಪ ಸೇರಿದಂತೆ ಸದಸ್ಯರು ಮುಗಿಬಿದ್ದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ಸಂಜೆ 4 ಗಂಟೆಗೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣ ಪಂಚಾಯ್ತಿಯಲ್ಲಿ ಅಧ್ಯಕ್ಷ ನವೀನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ನಡೆಯಿತು. ನಂತರ ಮಾತನಾಡಿದ ಸದಸ್ಯರುಗಳು ಪಾರ್ಕ್ ಅಭಿವೃದ್ಧಿ ಸೇರಿದಂತೆ ಇತರೆ ವಸ್ತುಗಳ ಖರೀದಿಯಲ್ಲಿ ಗೋಲ್ ಮಾಲ್ ನಡೆದಿದೆ ಎಂದು ಆರೋಪಿಸಿ ಹರಿಹಾಯ್ದರು.
Read More News
T & CPrivacy PolicyContact Us