Download Now Banner

This browser does not support the video element.

ರಾಣೇಬೆನ್ನೂರು: ದೇವರಗುಡ್ಡದಲ್ಲಿ "ಬಂಗಾರದ ಗಿಂಡಿಲೇ ನಾಡಿಗೆ ಸಿರಿ ಆಯಿತಲೇ ಪರಾಕ್" ಎಂದು ಕಾರ್ಣಿಕ ಭವಿಷ್ಯ ನುಡಿದ ಗೊರವಯ್ಯ ನಾಗಪ್ಪ

Ranibennur, Haveri | Oct 1, 2025
ಬಂಗಾರದ ಗಿಂಡಿಲೇ ನಾಡಿಗೆ ಸಿರಿ ಆಯಿತಲೇ ಪರಾಕ್' ಎಂದು ದೇವರಗುಡ್ಡ ಮಾಲತೇಶ್ವರ ಕಾರ್ಣಿಕದಲ್ಲಿ ಗೊರವಪ್ಪ ಭವಿಷ್ಯ ನುಡಿದಿದ್ದಾರೆ. ಈ ಮೂಲಕ ನಾಡಿನಲ್ಲಿ ಈ ವರ್ಷ ಹಿಂಗಾರು ಮಳೆ ಬೆಳೆ ಉತ್ತಮವಾಗಿರಲಿದ್ದು, ನಾಡಿಗೆ ಒಳಿತಾಗಲಿದೆ ಎಂದಾಗಿದೆ. ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಬುಧವಾರ ಸಂಜೆ ಕಾರ್ಣಿಕೋತ್ಸವ ನಡೆಯಿತು. ಪ್ರತಿ ವರ್ಷ ಆಯುಧ ಪೂಜೆ ದಿನದಂದು ನಡೆದ ಈ ಉತ್ಸವದಲ್ಲಿ, ಗೊರವಪ್ಪ ನಾಗಪ್ಪ ಅವರು ಸುಮಾರು 20 ಅಡಿ ಎತ್ತರದ ಬಿಲ್ಲನ್ನು ಏರಿದರು. ಅಲ್ಲಿಂದ "ಬಂಗಾರದ ಗಿಂಡಿಲೇ ನಾಡಿಗೆ ಸಿರಿ ಆಯಿತಲೇ ಪರಾಕ್' ಎಂದು ಭವಿಷ್ಯ ನುಡಿದರು. ನಂತರ ಬಿಲ್ಲು ಏರಿದ್ದ ಗೊರವಪ್ಪ ಕೆಳಗೆ ಧುಮುಕಿದರು. ಭಕ್ತರು ಅವರನ್ನು ನೆಲಕ್ಕೆ ಬೀಳದಂತೆ ಹಿಡಿದರು.
Read More News
T & CPrivacy PolicyContact Us