Download Now Banner

This browser does not support the video element.

ಚಿಕ್ಕಬಳ್ಳಾಪುರ: ಮೇಳ್ಯಾದಲ್ಲಿ ಸಹೋದರರಿಂದಲೇ ಅಣ್ಣನ ಕೊಲೆ,ನಗರದಲ್ಲಿ ಮಾಹಿತಿ ನೀಡಿದ ಎಸ್ಪಿ ಕುಶಾಲ್ ಚೌಕ್ಸೆ

Chikkaballapura, Chikkaballapur | Sep 4, 2025
ಗೌರಿಬಿದನೂರು ತಾಲೂಕಿನ ಮೇಳ್ಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಸಹೋದರರಿಂದಲೇ ಅಣ್ಣನ ಕೊಲೆಯಾದ ಘಟನೆ ಇಂದು ಸಂಜೆ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆಯವರು ಚಿಕ್ಕಬಳ್ಳಾಪುರದಲ್ಲಿ ಮಾಹಿತಿಯನ್ನು ನೀಡಿದ್ದು, ನಿತ್ಯವೂ ಕುಡಿದು ಬರುತ್ತಿದ್ದ ಅಣ್ಣತಮ್ಮಂದಿರು ಕ್ಷುಲ್ಲಕ ಕಾರಣಕ್ಕೆ ಕಟ್ಟಿಗೆಯಿಂದ ನರಸಿಂಹಮೂರ್ತಿ ಎಂಬುವರನ್ನು ರಾಮಾಂಜಿ ಮತ್ತು ಗಂಗಾಧರಪ್ಪ ಅವರು ಬಲವಾಗಿ ಹೊಡೆದಿದ್ದಾರೆ. ಇದರ ಹಿನ್ನೆಲೆಯಲ್ಲಿ ಗಾಯಗೊಂಡಿದ್ದ ನರಸಿಂಹಮೂರ್ತಿ ಅವರನ್ನು ಆಸ್ಪತ್ರೆಗೆ ಸಾಗಿಸಲಾದರೂ, ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಇನ್ನು ಇದಕ್ಕೆ ಸಂಬಂಧಪಟ್ಟಂತೆ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Read More News
T & CPrivacy PolicyContact Us