Download Now Banner

This browser does not support the video element.

ಹೊನ್ನಾಳ್ಳಿ: ಕ್ಯಾಸಿನಕೆರೆಯಲ್ಲಿ ಹೊಡೆದು ಹೋದ‌ ಭದ್ರಾ ಉಪ ನಾಲೆ ಕಾಲುವೆ: ಮಾಜಿ ಸಚಿವ ರೇಣುಕಾಚಾರ್ಯ ಆಕ್ರೋಶ

Honnali, Davanagere | Sep 13, 2025
ಕ್ಯಾಸಿನಕೆರೆಯಲ್ಲಿ ಹೊಡೆದು ಹೋದ‌ ಭದ್ರಾ ಉಪ ನಾಲೆ ಕಾಲುವೆ: ರೇಣುಕಾಚಾರ್ಯ ಆಕ್ರೋಶ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ಗ್ರಾಮದ ಭದ್ರಾ ಎಡದಂಡೆಯ ನಾಲೆಯ ಆನವೆರಿ ಉಪ ನಾಲೆಗೆ ಹೋಗುವ ತೊಟ್ಟಿಲು ಕಾಲುವೆ ಎರಡು ದಿನಗಳ ಹಿಂದೆ ಹೊಡೆದು ಹೋಗಿದ್ದು, ಸ್ಥಳಕ್ಕೆ ಶನಿವಾರ ಮಧ್ಯಾಹ್ನ 2 ಗಂಟೆಗೆ ಮಾಜಿ ಸಚಿವ ರೇಣುಕಾಚಾರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ತಕ್ಷಣ ಕಾಮಗಾರಿ ಸರಿಪಡಿಸಬೇಕೆಂದು ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಹರಿಹಾಯ್ದರು. ನಿನ್ನೆ ಭದ್ರಾಗೆ ಬಾಗಿನ‌ ಅರ್ಪಿಸಿದ ಡಿಸಿಎಂ ಡಿಕೆ ಶಿವಕುಮಾರ್ ಹಸಿ ಸುಳ್ಳುಗಳನ್ನು ಹೇಳಿದರು. ಭದ್ರಾ ಯೋಜನೆಗೆ, ನೀರಾವರಿ ಯೋಜನೆಗೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಹೋಟಕ್ಕೆ ಕರೆಯಿರಿ ನಾನು ಬರುತ್ತೇನೆ ಎಂದರು
Read More News
T & CPrivacy PolicyContact Us