Download Now Banner

This browser does not support the video element.

ಹಾಸನ: ಯರೆಹಳ್ಳಿ ಗ್ರಾಮದ ಬಳಿ ಯುವಕನ ಕೊಲೆ ಪ್ರಕರಣ ಐವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

Hassan, Hassan | Aug 28, 2025
ಹಾಸನ : ಮೊಬೈಲ್ ಅಡಮಾನ ವಿಷಯಕ್ಕೆ ಹಲ್ಲೆ ಮಾಡಿದ ಸಣ್ಣ ವಿಷಯಕ್ಕೆ ಸ್ನೇಹಿತರೇ ಮತ್ತೊಬ್ಬ ಸ್ನೇಹಿತನನ್ನು ಮಂಗಳವಾರ ರಾತ್ರಿ ಕೊಲೆ ಮಾಡಿದ ಪ್ರಕರಣ ಸಂಬಂಧ ಐವರು ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಯರೇಹಳ್ಳಿ ಬಳಿ ದೇವರಾಯಪಟ್ಟಣದ ಅಂಕಿತ್.ಸಿ.(21) ಎಂಬಾತನನ್ನು ಈ ದುರುಳರು ಕೊಲೆ ಮಾಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ ಪಿ ಮೊಹಮದ್ ಸುಜೀತಾ ಹಂತಕರನ್ನು ಬಂಧಿಸಲು, ಎರಡು ತನಿಖಾ ತಂಡಗಳನ್ನು ರಚನೆ ಮಾಡಿದ್ದರು.ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕೊಲೆ ನಡೆದ ಕೇವಲ 24 ಗಂಟೆಗಳಲ್ಲೇ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
Read More News
T & CPrivacy PolicyContact Us