ಶಿರವಾಡದ ಶ್ರೀ ಮಾರುತಿ ಮಂದಿರದಲ್ಲಿ ಅರ್ಚಕರು ಪೂಜೆ ಸಲ್ಲಿಸುವ ಸಿದ್ಧತೆಯಲ್ಲಿದ್ದ ವೇಳೆ ಭಕ್ತರೂ ಆಗಮಿಸಿದ್ದರು. ಈ ಸಂದರ್ಭದಲ್ಲಿ ವಾನರವೊಂದು ದೇವಸ್ಥಾನದ ಒಳಗೆ ಮಂಗಳವಾರ ಸಂಜೆ 6ರ ಸಂದರ್ಭದಲ್ಲಿ ಆಗಮಿಸಿದೆ. ಈ ವೇಳೆ ಬಕ್ತರು ಹನುಮಂತನಿಗಾಗಿ ಸಲ್ಲಿಸಿದ್ದ ಹಣ್ಣನ್ನು ತಿಂದು ಕೆಲ ಕಾಲ ಅಲ್ಲಿದ್ದ ವಾನರ ಹೊರ ಹೋಗಿದೆ. ಈ ವೇಳೆ ಭಕ್ತರೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು ಇದೀಗ ವಿಡಿಯೋ ವೈರಲ್ ಆಗುತ್ತಿದೆ