Download Now Banner

This browser does not support the video element.

ಹಾಸನ: ಇನ್ನು ಮುಂದೆ ನನ್ನನ್ನು ರಾಗಿ ಕಳ್ಳ ಮನೆ ಕಳ್ಳ ಎಂದು ಕರೆದರೆ ಸುಮ್ಮನಿರಲ್ಲ ನಗರದಲ್ಲಿ ಶಾಸಕ ಕೆಎಂ ಶಿವಲಿಂಗೇಗೌಡ ಎಚ್ಚರಿಕೆ

Hassan, Hassan | Aug 30, 2025
ಹಾಸನ :ಹಿಂದೆ ಆಡಿದಂತೆ ಇತ್ತೀಚೆಗೂ ರಾಗಿ ಕಳ್ಳ, ಮನೆಕಳ್ಳ ಅಂತೆಲ್ಲ ಫೇಸ್‌ಬುಕ್ ಜಾಲತಾಣದಲ್ಲಿ ಅಪ ಪ್ರಚಾರ ಮಾಡುತ್ತಿದ್ದಾನೆ. ಇವನಿಗೆ ಮಾನ ಮರ್ಯಾದೆ ಇದೆಯಾ, ಹಿಂದೆ ಇದೇ ಆರೋಪ ಮಾಡಿದ್ದ. ಧರ್ಮಸ್ಥಳಕ್ಕೆ ಬಂದು ಆಣೆ ಮಾಡು ಎಂದು ಕರೆದಿದ್ದಕ್ಕೆ ಬರಲಿಲ್ಲ, ನಾನು ಹೋಗಿ ಬಂದೆ, ಇವನಿಗೆ ಆತ್ಮಗೌರವ ಇದೆಯಾ, ಇನ್ನು ಸುಮ್ಮನೆ ಕೂರಲು ಆಗಲ್ಲ, ಸುಳ್ಳು ಆರೋಪ ಸಹಿಸಲು ಆಗಲ್ಲ, ಸೋಮವಾರವೇ ಮಾನನಷ್ಟ ಮೊಕದ್ದಮೆ ಹೂಡುವೆ ಎಂದರು. ಯಾರನ್ನ ಹೇಗೆ ಬೇಕಾದ್ರೂ ಮಾತಾಡಬಹುದಾ, ಆತ ಆಡಿರುವುದನ್ನು ಸಾಬೀತು ಮಾಡಬೇಕು, ಇಲ್ಲ ಗೌರವದಿಂದ ಇರಬೇಕು ಎಂದು ಎಚ್ಚರಿಸಿದರು.
Read More News
T & CPrivacy PolicyContact Us