ಪಟ್ಟಣದಲ್ಲಿ ಕಳೆದ 57 ವರ್ಷಗಳಿಂದ ಪ್ರತಿಷ್ಠಾಪಿಸಲ್ಪಡುತ್ತಿರುವ ಇಲ್ಲಿನ ಹಳೆ ಅಡತ್ ಬಜಾರ್ ಗಜಾನನ್ ಸಮಿತಿ ಈ ಬಾರಿ ಬುಧವಾರ ಪ್ರತಿಷ್ಠಾಪಿಸಲ್ಪಟ್ಟ ತಿರುಪತಿ ಮಾದರಿ ಮಂಟಪದಲ್ಲಿನ ಪಂಚಲೋಹ ಗಣಪತಿ ಭಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ವೇಳೆ ಗಣಪತಿ ಪ್ರತಿಷ್ಠಾಪನೆ 57ನೇ ವರ್ಷಾಚರಣೆ ಕುರಿತು ಸಮಿತಿ ಉಪಾಧ್ಯಕ್ಷ ಸುಭಾಷ ಭಗೋಜಿ ಬುಧವಾರ ರಾತ್ರಿ 8.30 ಕ್ಕೆ ವಿಸ್ತೃತ ವಿವರಿಸಿದರು. ಸಮಿತಿ ಅಧ್ಯಕ್ಷ ಜಗದೀಶ ಭಾವಿ ಹಾಗೂ ಸದಸ್ಯರಿದ್ದರು.