Download Now Banner

This browser does not support the video element.

ಮಳವಳ್ಳಿ: ಮದ್ದೂರು ಘಟನೆ ಖಂಡಿಸಿ ಜೆಡಿಎಸ್ ಬಿಜೆಪಿ ಮೈತ್ರಿಕೂಟ ಕರೆ ನೀಡಲಾಗಿದ್ದ ಮಳವಳ್ಳಿ ಬಂದ್ ಯಶಸ್ವಿ

Malavalli, Mandya | Sep 11, 2025
ಮಳವಳ್ಳಿ : ಮದ್ದೂರು ಪಟ್ಟಣದಲ್ಲಿ ಗಣೇಶ ಉತ್ಸವದ ವೇಳೆ ನಡೆದ ಕಲ್ಲು ತೂರಾಟ ಹಾಗೂ ನಂತರದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ನಡೆದ ಲಾಠಿ ಚಾಜ್೯ ಘಟನೆ ಖಂಡಿಸಿ ಮಳವಳ್ಳಿ ಪಟ್ಟಣದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಕೂಟ ಗುರುವಾರ ಕರೆ ನೀಡಿದ್ದ ಮಳವಳ್ಳಿ ಬಂದ್ ಯಶಸ್ವಿಯಾಗಿದೆ. ಇಂದು ಬೆಳಿಗ್ಗೆಯಿಂದಲೇ ಪಟ್ಟಣದ ಮೇಲೆ ಬಹುತೇಕ ಅಂಗಡಿ ಮುಂಗ ಟ್ಟುಗಳು ಹೋಟೆಲ್ ಗಳು ವಾಣಿಜ್ಯ ಸಂಸ್ಥೆಗಳು ಮುಚ್ಚಿದ್ದವು. ಸರ್ಕಾರಿ ಕಚೇರಿಗಳು ಶಾಲಾ ಕಾಲೇಜುಗಳು ಎಂದಿನಂತೆ ತೆರೆದಿದ್ದವು, ವಾಹನಗಳ ಸಂಚಾರ ಎಂದಿನಂತೆ ಸಾಮಾನ್ಯವಾಗಿತ್ತು , ಬಂದ್ ಹಿನ್ನೆಲೆಯಲ್ಲಿ 1.30ರ ಸಮಯದಲ್ಲಿ ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಪುತ್ಥಳಿ ಆವರಣದಿಂದ ಮೆರವಣಿಗೆ ಹೊರಟ ಬಿಜೆಪಿ ಜೆಡಿಎಸ್ ಮುಖಂಡರು ದಾರಿಯುದ್ದಕ್ಕೂ ಘಟನೆ ಖಂಡಿಸಿ ಘೋಷಣೆಗಳನ್ನು ಕೂಗಿದರು.
Read More News
T & CPrivacy PolicyContact Us