Download Now Banner

This browser does not support the video element.

ಹನೂರು: ಕುರಟ್ಟಿಹೊಸೂರು ಗ್ರಾಮದಲ್ಲಿ ಚರ್ಮ ಗಂಟು ರೋಗ ಮತ್ತೆ ಉಲ್ಬಣ – ಗ್ರಾಮಸ್ಥರಲ್ಲಿ ಆತಂಕ

Hanur, Chamarajnagar | Sep 12, 2025
ಚಾಮರಾಜನಗರ, ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿಹೊಸೂರು ಗ್ರಾಮದಲ್ಲಿ ಚರ್ಮ ಗಂಟು ರೋಗದ ಪರಿಣಾಮ ಮತ್ತೆರಡು ಕರುಗಳಲ್ಲಿ ರೋಗದ ಲಕ್ಷಣಗಳು ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಭಯದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ರೈತ ಮುನಿಸಿದ್ದ ಶೆಟ್ಟಿ ರವರಿಗೆ ಸೇರಿದ ಮೂರು ಕರುಗಳು ಈಗಾಗಲೇ ಈ ರೋಗಕ್ಕೆ ಬಲಿಯಾಗಿವೆ. ಇದೀಗ ಮತ್ತೆರಡು ಕರುಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದು, ರೋಗ ಸುತ್ತಮುತ್ತಲಿನ ಗ್ರಾಮಗಳಿಗೂ ವ್ಯಾಪಿಸುತ್ತಿರುವ ಸಂಕೇತಗಳು ಕಂಡುಬಂದಿವೆ.ಗಂಟು ಮಾದರಿಯಲ್ಲಿ ಕಾಣಿಸಿಕೊಳ್ಳುವ ಈ ಚರ್ಮ ರೋಗ ದಿನೇದಿನೆಗೆ ಉಲ್ಬಣವಾಗುತ್ತಿದ್ದು, ಸ್ಥಳೀಯ ರೈತರು ಮತ್ತು ಪಶುಪಾಲಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
Read More News
T & CPrivacy PolicyContact Us