ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತವಾಗಿ ನಾಯಕನಹಟ್ಟಿ ಪಟ್ಟಣದಲ್ಲಿ ಬುಧವಾರದಂದು ಪೊಲೀಸರಿಂದ ಪಥಸಂಚಲನ ನಡೆಯಿತು. ನಾಯಕನಹಟ್ಟಿ ಪಿಎಸ್ ಐ ಪಾಂಡುರಂಗಪ್ಪ ನೇತೃತ್ವದಲ್ಲಿ ಪಥಸಂಚಲನ ನಡೆಯಿತು. ನಾಯಕನಹಟ್ಟಿ ಪೊಲೀಸ್ ಠಾಣೆಯಿಂದ ಪಥ ಸಂಚಲನ ಆರಂಭಗೊಂಡು ಪಾದಗಟ್ಟೆಯವರೆಗೂ ತೆರಳಿ ಜಗಳೂರು ರಸ್ತೆಯ ಮೂಲಕ ಶ್ರೀಗುರು ತಿಪ್ಪೇರುದ್ರಸ್ವಾಮಿ ಒಳ ಮಠದವರೆಗೆ ಆಗಮಿಸಿತು.