Download Now Banner

This browser does not support the video element.

ಗುಂಡ್ಲುಪೇಟೆ: ಗರಗನಹಳ್ಳಿ ಗೇಟ್ ಬಳಿ ಬೈಕ್- ಟಿಪ್ಪರ್ ನಡುವೆ ಡಿಕ್ಕಿಯಾಗಿ ಸವಾರನಿಗೆ ತೀವ್ರಗಾಯ

Gundlupet, Chamarajnagar | Sep 3, 2025
ಬೈಕ್ ಹಾಗೂ ಟಿಪ್ಪರ್ ಲಾರಿ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಗರಗನಹಳ್ಳಿ ಗೇಟ್ ಬಳಿ ನಡೆದಿದೆ. ಕೂತನೂರು ಗ್ರಾಮದ ಮಂಜು(34) ತೀವ್ರವಾಗಿ ಗಾಯಗೊಂಡ ಬೈಕ್ ಸವಾರ. ಗುಂಡ್ಲುಪೇಟೆಯಿಂದ ತೆರಳುತ್ತಿದ್ದ ಬೈಕ್ ಗೆ ಕ್ರಷರ್ ಗೆ ಸೇರಿದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದ್ದು ಘಟನೆಯಲ್ಲಿ ಬೈಕ್ ಸವಾರನ ಕೈಗೆ ತೀವ್ರ ಗಾಯವಾಗಿದ್ದು, ತಲೆ, ಹೊಟ್ಟೆ, ಎದೆ ಭಾಗಕ್ಕೂ ಪೆಟ್ಟು ಬಿದ್ದಿದ್ದು ಗಾಯಾಳು ಸದ್ಯ ಸಿಮ್ಸ್ ಗೆ ದಾಖಲಾಗಿದ್ದಾರೆ. ಈ ಸಂಬಂಧ ಬೈಕ್ ಹಾಗೂ ಟಿಪ್ಪರ್ ಲಾರಿಯನ್ನು ಬೇಗೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Read More News
T & CPrivacy PolicyContact Us