Download Now Banner

This browser does not support the video element.

ಭಾಲ್ಕಿ: ಪಟ್ಟಣದಲ್ಲಿ ಮಳೆಗೆ ಮನೆ ಗೋಡೆಗಳ ಕುಸಿತ; ಸಂತ್ರಸ್ತರಿಗೆ 11ಲಕ್ಷ ಪರಿಹಾರ ಧನದ ಚಕ್ ವಿತರಣೆ

Bhalki, Bidar | Sep 2, 2025
ಭಾಲ್ಕಿ: ಪಟ್ಟಣದಲ್ಲಿ ಕಳೆದ ವಾರದಿಂದ ಬೀದರ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ಮನೆಗಳು ಕುಸಿದು ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂದು ಭಾಲ್ಕಿ ತಾಲೂಕಿನ 20 ರಿಂದ 50% ಹಾನಿಗೊಳಗಾದ ಸುಮಾರು 36 ಸಂತ್ರಸ್ತ ಕುಟುಂಬಗಳಿಗೆ ತಲಾ 30 ಸಾವಿರ ರೂ. ಪರಿಹಾರದಂತೆ ಒಟ್ಟು 11 ಲಕ್ಷ ರೂ. ಪರಿಹಾರ ಆದೇಶ ಪತ್ರಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ವಿತರಿಸಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸಚಿವರು ಮಾತನಾಡಿ, “ಬರಿ ಭಾಲ್ಕಿಯಲ್ಲದೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಕೂಡ ತ್ವರಿತವಾಗಿ ಪರಿಹಾರ ವಿತರಣೆ ನಡೆಯುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಸರ್ಕಾರ ಸದಾ ಸಂತ್ರಸ್ತ ಕುಟುಂಬಗಳ ಜೊತೆ ನಿಂತಿದೆ” ಎಂದು ಭರವಸೆ ನೀಡಿದರು.
Read More News
T & CPrivacy PolicyContact Us