ಸಚಿವ ರಾಮಲಿಂಗಾರೆಡ್ಡಿ ಅವರು ಮದ್ದೂರು ಘಟನೆ ವಿಚಾರಕ್ಕೆ ಸಂಬಂಧಿಸಿ ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ಮದ್ದೂರಿನಲ್ಲಿ ಗಣೇಶನ ಉತ್ಸವದಲ್ಲಿ ಕಲ್ಲು ಹೊಡೆದ್ರು, ಗಲಾಟೆ ಆಗಿದೆ ಕೇಸ್ ಕೂಡ ದಾಖಲು ಆಗಿದೆ. ಕಾನೂನು ಪ್ರಕಾರವೇ ಕ್ರಮ ಆಗುತ್ತದೆ. ಈ ಬಿಜೆಪಿ ಅವರು ಏನು ಮಾಡ್ತಾರೆ ಅಂದ್ರೆ, ಬೆಂಕಿಗೆ ತುಪ್ಪ ಹಾಕೋ ಕೆಲಸ ಮಾಡ್ತಾರೆ. ರಾಜ್ಯದಲ್ಲಿ ಅರಾಜಕತೆ ಸೃಷ್ಠಿ ಮಾಡ್ತಿದ್ದಾರೆ. ಕಲ್ಲು ಹೊಡೆದವರ ಮೇಲೆ ಕ್ರಮತಗೊಂಡಿಲ್ಲ ಅಂದ್ರೆ, ಆಗ ಇವರು ಬೇಕಾದ್ರೆ ಮಾತನಾಡಲಿ ಎಂದರು.