Download Now Banner

This browser does not support the video element.

ಚಿತ್ರದುರ್ಗ: ಚಿತ್ರದುರ್ಗದಲ್ಲಿ ನಿಗಮ ಮಂಡಳಿ ಸ್ಥಾ‌ನ ಕೈತಪ್ಪಿದ್ದಕ್ಕೆ ಆರ್.ಕೆ. ಸರ್ಧಾರ್ ಬೆಂಬಲಿಗರ ಪ್ರತಿಭಟನೆ

Chitradurga, Chitradurga | Sep 29, 2025
ನಿಗಮ ಮಂಡಳಿ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಆರ್.ಕೆ. ಸರ್ಧಾರ್ ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸಿದರು. ಸೋಮವಾರ ಬೆಳಿಗ್ಗೆ 11 ಗಂಟೆಗೆ ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿ ಮುಂಭಾಗ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದಕ್ಕೆ ಹಲವು ವರ್ಷಗಳಿಂದ ದುಡಿದಿದ್ದಾರೆ, ಮುಸ್ಲಿಂ ಸಮುದಾಯದಲ್ಲಿ ಹಿರಿಯ ನಾಯಕರಿದ್ದಾರೆ. ಆದರೂ ಕಳೆದ ಬಾರಿ ಕಾಂಗ್ರೆಸ್ ಪಕ್ಷದ ಟಿಕೆಟ್ ಕೈತಪ್ಪಿತ್ತು. ಇದೀಗ ನಿಗಮ ಮಂಡಳಿ ಸ್ಥಾನವೂ ಕೈ ತಪ್ಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಇದೆ ವೇಳೆ ಆರ್.ಕೆ. ಸರ್ಧಾರ್ ಪರ ಬೆಂಬಲಿಗರು ಜೈಕಾರ ಕೂಗಿ ಪೋಸ್ಟರ್ ಪ್ರದರ್ಶನ ಮಾಡಿದರು. ಈ ವೇಳೆ ನೂರಕ್ಕೂ ಹೆಚ್ಚು ಮಂದಿ ಬೆಂಬಲಿಗರು ಸಾಥ್ ನೀಡಿದರು.
Read More News
T & CPrivacy PolicyContact Us