ಕಲಬುರಗಿ : ಹದಗೆಟ್ಟ ಶಹಬಾದ್-ಜೇವರ್ಗಿ ರಾಜ್ಯ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಕಲಬುರಗಿ ಜಿಲ್ಲೆ ಶಹಬಾದ್ ಪಟ್ಟಣದ ಹೊರವಲಯದಲ್ಲಿ ತಗ್ಗುಗುಂಡಿ ರಸ್ತೆಯಲ್ಲಿ ಸಸಿ ನೆಟ್ಟು ಜಯ ಕರ್ನಾಟಕ ಸಂಘಟನೆ ವಿನೂತನ ಪ್ರತಿಭಟನೆ ನಡೆಸಿದೆ.. ಜು28 ರಂದು ಮಧ್ಯಾನ 3 ಗಂಟೆಗೆ ಶಹಬಾದ್ ತಾಲೂಕು ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ರಾಜ್ಯ ಹೆದ್ದಾರಿ 125 ರಲ್ಲಿ ಮೊಳಕಾಲುದ್ದ ತಗ್ಗು ಗುಂಡಿ ಬಿದ್ದು ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗ್ತಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು