Download Now Banner

This browser does not support the video element.

ಬೆಂಗಳೂರು ಉತ್ತರ: ಚಾಮುಂಡೇಶ್ವರಿ ಎಲ್ಲ ಧರ್ಮದವರನ್ನೂ ಹರಸುವ ನಾಡದೇವತೆ - ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್

Bengaluru North, Bengaluru Urban | Aug 27, 2025
ಚಾಮುಂಡೇಶ್ವರಿ ತಾಯಿ ನಾಡ ದೇವತೆ, ಹಿಂದೂ ಧರ್ಮದವರು ಮಾತ್ರ ಪೂಜಿಸಬೇಕು ಎಂದು ರಾಜ ವಂಶಸ್ಥರಾಗಲಿ ಸರ್ಕಾರವಾಗಲಿ ಹೇಳಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.ಸದಾಶಿವನಗರದ ತಮ್ಮ ನಿವಾಸದ ಬಳಿ ಆಗಸ್ಟ್ 27ರಂದು ಬೆಳಿಗ್ಗೆ 11 ಗಂಟೆಗೆ ಮಾತನಾಡಿದ ಅವರು, "ರಾಜವಂಶಸ್ಥರು ಹಾಗೂ ಸರ್ಕಾರ ಚಾಮುಂಡೇಶ್ವರಿ ತಾಯಿಯನ್ನ ನಾಡದೇವತೆ ಎಂದು ಒಪ್ಪಿ ಪೂಜಿಸುತ್ತಿದ್ದೇವೆ. ಚಾಮುಂಡೇಶ್ವರಿ ಎಲ್ಲಾ ಧರ್ಮದವರಿಗೂ ಆಶೀರ್ವಾದ ಮಾಡಲು ಇರುವ ನಾಡ ದೇವತೆ. ಹಿಂದೂಗಳು ಮಾತ್ರ ಬರಬೇಕು, ಬೇರೆಯವರು ಬರಬಾರದು ಎನ್ನುವುದಿಲ್ಲ ಎಂದು ಅವರು ತಿಳಿಸಿದರು.
Read More News
T & CPrivacy PolicyContact Us