ಬಸವಕಲ್ಯಾಣ: ಸಾಲಬಾಧೆಯಿಂದ ಬಳಲುತಿದ್ದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯದಲಾಪೂರ ಗ್ರಾಮದಲ್ಲಿ ಜರುಗಿದೆ. ನರೇಂದ್ರರೆಡ್ಡಿ ಕಾಶಿನಾಥರೆಡ್ಡಿ ಪಾಟೀಲ್ (62) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ