ಕೆರೆ ಕೋಡಿಯ ಕಟ್ಟೆ ಒಡೆದು ನೀರು ಪೋಲಾಗುತ್ತಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೆಳಚಲವಾಡಿ ಕೆರೆಯಲ್ಲಿ ನಡೆದಿದೆ. ಕೆರೆ ಕಟ್ಟೆ ಒಡೆದು ಹೋಗಿರುವುದು ಸ್ವಾಭವಿಕವಾಗಿಯೋ ಅಥವಾ ಕಿಡಿಗೇಡಿಗಳ ಕೃತ್ಯವೊ ಎಂಬುದು ತಿಳಿದುಬಂದಿಲ್ಲ. ಸ್ಥಳೀಯ ರೈತರೊಬ್ಬರು ಇದರ ವೀಡಿಯೋ ಮಾಡಿ ಈ ರೀತಿ ನೀರು ಪೋಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಧಿಕಾರಿಗಳು ಭೇಟಿ ಕೊಟ್ಟು, ಕೋಡಿಕ ಕಟ್ಟೆಯನ್ನು ಸರಿಪಡಿಬೇಕೆಂದು ವೀಡಿಯೋದಲ್ಲಿ ರೈತ ಆಗ್ರಹಿಸಿದ್ದಾರೆ.