ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಯಾಗುವ ಮೂಲಕ ಮಾದಿಗ ಸಮುದಾಯದ ಸುದೀರ್ಘ ಮೂರು ದಶಕಗಳ ಹೋರಾಟಕ್ಕೆ ಫಲ ಸಿಕ್ಕ ಖುಷಿಗಾಗಿ ಇಂದು ರಾಯಚೂರಿನಲ್ಲಿ ಸಮುದಾಯದ ಬಂಧುಗಳು ಸಿಹಿ ಹಂಚಿ ಸಂಭ್ರಮಿಸಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ನೆರೆದಿದ್ದ ಈ ಸಂಭ್ರಮಾಚರಣೆಯ ಮುಖಂಡರು ಒಳಮೀಸಲಾತಿ ಜಾರಿಗಾಗಿ ಶ್ರಮಿಸಿದ ಹಲವಾರು ಹೋರಾಟಗಾರರ, ಮುಖಂಡರ ಸಂಘಟನೆಗಳ ಶ್ರಮ ಮತ್ತು ಪ್ರಾಣತ್ಯಾಗವನ್ನು ಸ್ಮರಣೆ ಮಾಡಿದರು. ನಂತರ ಪ್ರಸ್ತುತ ಕಾಂಗ್ರೆಸ್ ಸರ್ಕಾರದಿಂದ ಒಳಮೀಸಲಾತಿ ಜಾರಿಯಾಗಲು ತಮ್ಮದೆಯಾದ ಪ್ರಭಾವ, ಚಾಣಕ್ಯ ನೀತಿಯಿಂದ ಹಗಲಿರುಳು ಶ್ರಮಿಸಿದ, ಹಾಗೂ ಇಡೀ ರಾಜ್ಯ ಸಂಚಾರ ಮಾಡಿ ಮಾದಿಗ ಸಮುದಾಯದಲ್ಲಿ ಸಮೀಕ್ಷೆ ಜಾಗೃತಿ ಮೂಡಿಸಿದ ಮಾಜಿ ಸಚಿವ, ಶೋಷಿತರ ಗ