Download Now Banner

This browser does not support the video element.

ರಾಮನಗರ: ಗಣೇಶ ಹಬ್ಬ ಹಿನ್ನೆಲೆ ಬಿಡದಿಯಲ್ಲಿ ಹೂ-ಹಣ್ಣು ಖರೀದಿಗೆ ಮುಗಿ ಬಿದ್ದ ಜನರು

Ramanagara, Ramanagara | Aug 26, 2025
ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಬೇಕಾದ ಹೂವು, ಹಣ್ಣು, ಬಾಳೆಕಂದುಗಳ ಖರೀದಿ ಭರಾಟೆ ಜೋರಾಗಿತ್ತು. ಬಿಡದಿಯ ಮಾರುಕಟ್ಟೆಗಳಲ್ಲಿ ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದ್ದರೂ, ಜನರು ಚೌಕಾಸಿ ಮಾಡಿ ಖರೀದಿಯಲ್ಲಿ ತೊಡಗಿದ್ದರು. ತರಹೇವಾರಿ ಗಣೇಶ ವಿಗ್ರಹಗಳು ಜನರ ಗಮನ ಸೆಳೆಯುತ್ತಿವೆ. ವ್ಯಾಪಾರಿಗಳು ಹಬ್ಬದ ಸೀಸನ್‌ನಿಂದ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಎಂದು ಖುಷಿಯಲ್ಲಿದ್ದರು.
Read More News
T & CPrivacy PolicyContact Us