Download Now Banner

This browser does not support the video element.

ಕೋಲಾರ: ಮಾನವೀಯತೆಯೇ ಧರ್ಮ ಎಂದು ಪ್ರತಿಪಾದಿಸಿದವರು ವಾಲ್ಮೀಕಿ ; ನಗರದಲ್ಲಿ ಕೆ.ಜಯದೇವ್

Kolar, Kolar | Oct 7, 2025
ಮಾನವೀಯತೆಯೇ ಧರ್ಮ ಎಂದು ಪ್ರತಿಪಾದಿಸಿದವರು ವಾಲ್ಮೀಕಿ ; ಕೆ.ಜಯದೇವ್ ಕೋಲಾರ ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಮಂಗಳವಾರ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ವಿಭಾಗದ ಅಧ್ಯಕ್ಷ ಕೆ.ಜಯದೇವ್ ಮಾತನಾಡಿ, ಪುರಾಣಗಳಲ್ಲಿ ಉಳಿಯುವಂತೆ ಮಾನವೀಯತೆಯೇ ಧರ್ಮ ಎಂಬುದನ್ನು ಪ್ರತಿಪಾದಿಸಿದ ದಾರ್ಶನಿಕ ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದು ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ ಮಾರ್ಗದರ್ಶನದಲ್ಲಿ ನಾವು ಎಲ್ಲರೂ ನಡೆದಾಗ ಮಾತ್ರವೇ ಅವರಿಗೆ ಗೌರವ ಕೊಟ್ಟಂತೆ ಆಗುತ್ತದೆ ಎಂದರು.
Read More News
T & CPrivacy PolicyContact Us