ಕೊಳ್ಳೇಗಾಲ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರದಂದು ಮಾಜಿ ಸಚಿವ ಎನ್. ಮಹೇಶ್ ಅವರ ಸಮ್ಮುಖದಲ್ಲಿ 50 ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಎಸ್ಸಿ ಪಕ್ಷಗಳನ್ನು ತೊರೆದು ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾದರು. ಈ ಕಾರ್ಯಕ್ರಮವನ್ನು ಮಾಜಿ ಸಚಿವರ ಎನ್. ಮಹೇಶ್ ನೇತೃತ್ವದಲ್ಲಿ ಆಯೋಜಿಸಲಾಗಿತ್ತು ಈ ವೇಳೆಮೋಳೆ ಬಡಾವಣೆಯಿಂದ ರಾಜೇಶ್, ನವೀನ, ರಾಜು, ದರ್ಶನ್, ಅಭಿ, ರಘು, ಕಿರಣ್, ರವಿ ಹಾಗೂ ಮುಡಿಗುಂಡ ಬಡಾವಣೆಯಿಂದ ರಾಜು, ಧನುಷ್, ಮಣಿ, ಪ್ರಜ್ಜು, ಸಂತೋಷ, ಜಗ್ಗು, ರವಿ ಮತ್ತು ಇತರರು ಪ್ರಮುಖವಾಗಿ ಸೇರ್ಪಡೆಗೊಂಡವರು.