ಕಲಬುರಗಿ : ಜಾತಿ ಸಮೀಕ್ಷೆಯಲ್ಲಿ ಹಿಂದೂ ಒಳಪಂಗಡದಲ್ಲಿ ಕ್ರಿಶ್ಚಿಯನ್ ಹೆಸರು ನಮೂದು ವಿಚಾರಕ್ಕೆ ಸಂಬಂಧಿಸಿದಂತೆ, ನ್ಯೂನತೆ ಸರಿಪಡಿಸಲು ಆಗ್ರಹಿಸಿ 20 ಕ್ಕೂ ಅಧಿಕ ಮಠಾಧೀಶರಿಂದ ಕಲಬುರಗಿ ಡಿಸಿಯನ್ನ ಭೇಟಿ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.. ಸೆಪ್ಟೆಂಬರ್ 8 ರಂದು ಮಧ್ಯಾನ 3 ಗಂಟೆಗೆ ಆಂದೋಲದ ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ 20 ಕ್ಕೂ ಅಧಿಕ ಮಠಾಧೀಶರಿಂದ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.. ಇನ್ನೂ ಸರ್ಕಾರ ಕೂಡಲೇ ಇದನ್ನ ಸರಿಪಡಿಸಬೇಕು.. ಇಲ್ಲವಾದಲ್ಲಿ ಹೋರಾಟ ಮಾಡಲಾಗುತ್ತದೆಂದು ಎಚ್ಚರಿಕೆ ನೀಡಿದ್ದಾರೆ..