Download Now Banner

This browser does not support the video element.

ಶೃಂಗೇರಿ: ಶಾರದಾ‌ಂಬೆಯ ದರ್ಶನ ಪಡೆದು ಜಗದ್ಗುರುಗಳ ದರ್ಶನಾಶೀರ್ವಾದ ಪಡೆದ ಸಚಿವ ದಿನೇಶ್ ಗುಂಡೂರಾವ್.!

Sringeri, Chikkamagaluru | Oct 7, 2025
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಶ್ರೀ ಶಾರದಾ ಪೀಠಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಚಿವರು ಶಾರದಾ ಪೀಠದ ಹಿರಿಯ ಜಗದ್ಗುರುಗಳಾದ ಭಾರತೀ ತೀರ್ಥ ಮಹಾಸ್ವಾಮಿಗಳ ಆಶೀರ್ವಾದ ಪಡೆದ್ರು. ಮಠದ ಪರಂಪರೆ, ಧಾರ್ಮಿಕ ಮಹತ್ವ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳ ಬಗ್ಗೆ ಜಗದ್ಗುರುಗಳೊಂದಿಗೆ ಕೆಲ ಹೊತ್ತು ಸಚಿವರು ಮಾತುಕತೆ ನಡೆಸಿದರು. ಸಚಿವರು ರಾಜ್ಯದ ಆರೋಗ್ಯ ಕ್ಷೇತ್ರದ ಅಭಿವೃದ್ಧಿ ಜನೋಪಯೋಗಿ ಯೋಜನೆಗಳು ಮತ್ತು ಸಮಾಜದ ಸೌಹಾರ್ದತೆಗಾಗಿ ಶಾರದಾಂಬೆಯ ಆಶೀರ್ವಾದವನ್ನು ಕೋರಿದ್ದಾರೆಂದು ಮೂಲಗಳು ತಿಳಿಸಿವೆ.
Read More News
T & CPrivacy PolicyContact Us