Download Now Banner

This browser does not support the video element.

ಮಂಗಳೂರು: ಪಳ್ನೀರ್‌ ನಲ್ಲಿ ತಂಡದಿಂದ ಆಟೋ ಚಾಲಕನಿಗೆ ಹಲ್ಲೆ ಆರೋಪ: ದೂರು

Mangaluru, Dakshina Kannada | Sep 1, 2025
ಆಟೋ ಚಾಲಕನೋರ್ವನಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಮಂಗಳೂರು ನಗರದ ಫಳ್ನೀರ್‌ನ ಬಳಿ ರವಿವಾರ ರಾತ್ರಿ ನಡೆದಿದೆ. ಪೊಲೀಸರಿಗೆ ಮಾಹಿತಿ ನೀಡುತ್ತಾರೆ ಎಂಬ ಆರೋಪದಲ್ಲಿ ತಂಡ ರಿಕ್ಷಾ ಚಾಲಕ ಬಶೀರ್ ಎಂಬವರಿಗೆ ಹಲ್ಲೆ ನಡೆಸಿದೆ ಎಂದು ತಿಳಿದು ಬಂದಿದೆ. ಚಾಲಕನಿಗೆ ಎದೆಗೆ ಚುಚ್ಚಿದ ಗಾಯವಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಘಟನೆ ಬಗ್ಗೆ ಗಾಯಾಳು ಆಟೋ ಚಾಲಕನಿಂದ ಮಾಹಿತಿ ಪಡೆಯಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್ ತಿಳಿಸಿದ್ದಾರೆ.
Read More News
T & CPrivacy PolicyContact Us