ಮದ್ದೂರು ತಾಲ್ಲೂಕು ಭಾರತೀನಗರದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ನಾಗರ ಕಲ್ಲಿಗೆ ಮಹಿಳೆಯರು ಮತ್ತು ಮಕ್ಕಳು ತನಿ ಎರೆಯುವ ಮೂಲಕ ಪೂಜೆ ಸಲ್ಲಿಸಿದರು. ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿರುವ ಅರಳಿಕಟ್ಟೆಯಲ್ಲಿರುವ ನಾಗರಕಲ್ಲಿಗೆ ಮಹಿಳೆಯರು ಗೌರಿ-ಗಣೇಶ ಹಬ್ಬದ ಪ್ರಯುಕ್ತ ಹಾಲು ಎರೆಯುವ ಮೂಲಕ ಅಕ್ಕಿ ಮತ್ತು ಎಳ್ಳಿನ ತಬ್ಬಿಟ್ಟನ್ನು ಸಮಪರ್ಿಸಿ ಪೂಜೆ ಸಲ್ಲಿಸಿದರು. ಕೆ.ಎಂ.ದೊಡ್ಡಿ, ಜಿ.ಮಾದೇಗೌಡ ಬಡಾವಣೆ ಸೇರಿದಂತೆ ವಿವಿಧ ಭಾಗಗಳಿಂದ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆವಿಗೂ ತನಿ ಎರೆಯುವ ಮೂಲಕ ಪೂಜೆ ಸಮಪರ್ಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರುವಂತೆ ಬೇಡಿಕೊಂಡರು.