Download Now Banner

This browser does not support the video element.

ರಾಯಚೂರು: ನಗರದ ಕೃಷ್ಣಗಿರಿ ಹಿಲ್ಸ್ ಬಳಿ ಬೆಟ್ಟದ ತಪ್ಪಲಿನ ಹೊಂಡದಲ್ಲಿ ಕೈ ತೊಳೆಯಲು ಹೋಗಿ ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ

Raichur, Raichur | Sep 5, 2025
ರಾಯಚೂರು ನಗರದ ಕೃಷ್ಣಗಿರಿ ಹಿಲ್ಸ್ ಬಳಿಯ ಬೆಟ್ಟದ ತಪ್ಪಲಿನಲ್ಲಿದ್ದ ಪಂಡದಲ್ಲಿ ಕೈ ತೊಳೆಯಲು ಹೋಗಿದ್ದ 15 ವರ್ಷದ ಬಾಲಕ ನೀರು ಪಾಲಾಗಿದ್ದ ಘಟನೆ ನಡೆದಿತ್ತು. ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದು ಗೌತಮ್ ಎನ್ನುವ ಬಾಲಕ ನೀರಿನಲ್ಲಿ ಮುಳುಗಿದ್ದ ನಂತರ ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಸಿ ಶುಕ್ರವಾರ ಸಂಜೆ ಬಾಲಕನ ಶವ ಪತ್ತೆಯಾಗಿದೆ. ಸತತ ಆರು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿ ಬಾಲಕನ ಶವ ಹೊರತೆಗೆದು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಉಪಹಾರ ಸೇವಿಸಿ ಹೊಂಡದಲ್ಲಿ ಕೈ ತೊಳೆಯಲು ಹೋದಾಗ ಕಾಲುಜಾರಿ ನೀರಿನಲ್ಲಿ ಬಾಲಕ ಮುಳುಗಿದ್ದ ಎಂದು ತಿಳಿದುಬಂದಿದೆ. ಬಾಲಕನ ಶವ ಹೊರ ತೆಗೆಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Read More News
T & CPrivacy PolicyContact Us