Download Now Banner

This browser does not support the video element.

ಶಿರಾ: ತಮಿಳುನಾಡಿಗೆ ಅಗತ್ಯಕ್ಕಿಂತ ಅಧಿಕ ಕಾವೇರಿ ನೀರು ಹರಿಸಲಾಗಿದೆ: ಕಳ್ಳಂಬೆಳ್ಳದಲ್ಲಿ ಶಾಸಕ ಟಿ.ಬಿ ಜಯಚಂದ್ರ

Sira, Tumakuru | Aug 25, 2025
ತಮಿಳುನಾಡಿಗೆ ಅಗತ್ಯಕ್ಕಿಂತ ಹೆಚ್ಚಾಗಿ ಕಾವೇರಿ ನೀರನ್ನು ಹರಿಸಲಾಗಿದೆ ಎಂದು ಶಿರಾ ವಿಧಾನಸಭಾ ಕ್ಷೇತ್ರದ ಶಾಸಕ ಟಿ. ಬಿ. ಜಯಚಂದ್ರ ಹೇಳಿದರು. ಹೇಮಾವತಿ ನೀರಿನಿಂದ ಭರ್ತಿಯಾದ ಶಿರಾ ವಿಧಾನಸಭಾ ಕ್ಷೇತ್ರದ ಕಳ್ಳಂಬೆಳ್ಳ ಕೆರೆಗೆ ಶಾಸಕ ಟಿ. ಬಿ. ಜಯಚಂದ್ರ ಗಂಗಾ ಪೂಜೆ ನೆರವೇರಿಸಿದ ಬಳಿಕ 11 ಕೆರೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಬಳಿಕ ಅವರು ಮಾತನಾಡಿದರು ಸೋಮವಾರ ಮಧ್ಯಾಹ್ನ ಸುಮಾರು 1 ರ ಸಮಯದಲ್ಲಿ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ತಮಿಳುನಾಡಿಗೆ ಕರ್ನಾಟಕ ದಿಂದ 177.25 ಟಿ ಎಂ ಸಿ ನೀರು ಹರಿಸಬೇಕಿದೆ ಹೀಗಾಗ್ಲೇ 195 ಟಿ ಎಂ ಸಿ ನೀರನ್ನ ತಮಿಳುನಾಡಿಗೆ ಹರಿಸಲಾಗಿದೆ. ಈ ಹಿನ್ನಲೆ ಇನ್ನು ಮಳೆಗಾಲವಿದ್ದು. ಕುಣಿಗಲ್ ಸೇರಿದಂತೆ ಮಾಗಡಿಗೂ ಹೇಮಾವತಿ ನೀರು ಹರಿಸಲು ಸಾಧ್ಯವಿದೆ ಎಂದರು.
Read More News
T & CPrivacy PolicyContact Us