ಭಾಲ್ಕಿ: ಸಂಸದ ಸಾಗರ ಖಂಡ್ರೆ ಅವರು ತಾಲೂಕಿನ ಕಾಸರ ತೂಗಾವ್, ಶಿವಣಿ, ಲಖನಗಾವ್, ಸೋಮಪುರ, ತಳವಾಡ(ಎಂ) ಹಾಗೂ ತೆಲಗಾವ್ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ರೈತರು ಬೆಳೆದ ಖರೀಫ್ ಬೆಳೆಗಳು ಸಂಪೂರ್ಣವಾಗಿ ನಷ್ಟಗೊಂಡಿರುವದನ್ನು ಗಮನಿಸಿದರು. ಗ್ರಾಮಸ್ಥರ ಅಳಲುಗಳನ್ನು ಆಲಿಸಿದ ಸಂಸದರು, ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮಗಳನ್ನು ಶೀಘ್ರ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.