ಹಳಿಯಾಳ : ಖಾಸಗಿ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ರಾಜಸ್ತಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹಳಿಯಾಳ - ಜೋಯಿಡಾ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್ ವಿ ದೇಶಪಾಂಡೆಯವರ ಬೆಂಗಳೂರಿನಲ್ಲಿರುವ ಸ್ವಗೃಹಕ್ಕೆ ಬುಧವಾರ ಸಂಜೆ 4:00 ಸುಮಾರಿಗೆ ಭೇಟಿ ನೀಡಿದರು. ಅಶೋಕ್ ಗೆಹ್ಲೊಟ್ ಅವರನ್ನು ಆರ್.ವಿ.ದೇಶಪಾಂಡೆಯವರು ಆತ್ಮೀಯವಾಗಿ ಸ್ವಾಗತಿಸದರು. ನಂತರ ಪ್ರಸಕ್ತ ರಾಜಕೀಯ ಚಟುವಟಿಕೆಗಳ ಕುರಿತು ಉಭಯ ನಾಯಕರ ನಡುವೆ ಚರ್ಚೆ ನಡೆಯಿತು