Download Now Banner

This browser does not support the video element.

ತೀರ್ಥಹಳ್ಳಿ: ಆಗುಂಬೆಯ ಶ್ರೀರಾಮ ಮಂದಿರ ದೇವಾಲಯದಲ್ಲಿ ಕಳ್ಳತನ :ಆರೋಪಿಯ ಬಂಧನ

Tirthahalli, Shimoga | Sep 9, 2025
ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ಶ್ರೀರಾಮಮಂದಿರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.ಸೆಪ್ಟೆಂಬರ್ 8ರ ರಾತ್ರಿ ದೇವಸ್ಥಾನದ ಬಾಗಿಲು ಒಡೆದು ಶ್ರೀರಾಮದೇವರ ವಿಗ್ರಹ,ದೇವರ ಕೈಯಲ್ಲಿದ್ದ ಬಿಲ್ಲು, ಕಾಣಿಕೆಹುಂಡಿಯಲ್ಲಿದ್ದ ಹಣವನ್ನ ಕಳ್ಳತನ ಮಾಡಲಾಗಿತ್ತು.ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸಂಕದಹೊಳೆ ನಿವಾಸಿಯಾದ ಮನೋಜ್ ಅಲಿಯಾಸ್ ಗುಂಡ ಎಂಬಾತ ನನ್ನ ಬಂಧಿಸಿದ್ದು, ಬಂಧಿತನ ಬಳಿ ಕಳುವಾದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಕುರಿತಾದ ಮಾಹಿತಿ ಮಂಗಳವಾರ ಲಭ್ಯವಾಗಿದೆ.
Read More News
T & CPrivacy PolicyContact Us